Posts

Showing posts from January, 2018

"ಮಕ್ಕಳಶಿಬಿರ-01"

Image
ಮಕ್ಕಳಶಿಬಿರ. ಅಜ್ಜಂಪುರದ ಬಾಲಕರ ಶಾಲೆ ಹಾಗೂ ಬಾಲಕಿಯರ ಶಾಲೆಯ ಶಿಕ್ಷಕರು ಅತಿಥಿಗಳಾಗಿ ಆಗಮಿಸಿರುವುದು.  ಹೊಂಗಿರಣ ಸಂಸ್ಥೆಯ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅದ್ಯಕ್ಷರಾದ ಎ.ಸಿ.ಚಂದ್ರಪ್ಪನವರು ಆಗಮಿಸಿದ್ದರುˌಸರ್ಕಾರಿ ಪ್ರಾಥಮಿಕ ಶಾಟಲೆಯ ಬಾಲಕ ಹಾಗೂ ಬಾಲಕಿಯರ ಶಾಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಆಗಮಿಸಿದ್ದರು.  ಅಣ್ಣೇಶ್ ರವರು ನಿರೂಪಿಸಿˌ ಕೀರ್ತಿರಾಜ್ ರವರು ಸ್ಟಾಗತಿಸಿ ಪ್ರನೀತ್ ರವರು ವಂದಿಸಿದರು.    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಆಗಮಿಸಿದ್ದರು.

"ಮಕ್ಕಳ ಶಿಬಿರ"

Image
ಹೊಂಗಿರಣ     ಮಕ್ಕಳ ಶಿಬಿರದ ಎರಡನೇದಿನದಂದು ಶ್ರಿಯುತ ವಿನಾಯಕ್ ರವರು ಮಕ್ಕಳಿಗೆ ಸಾರ್ವಜನಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರುˌಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಕೀರ್ತಿರಾಜ್ ರವರು ವಹಿಸಿಕೊಂಡಿದ್ದರು.      ನಂತರ ಮಕ್ಕಳಿಗೆ ಆಟೋಟಗಳನ್ನು ಆಡಿಸಿ ಸ್ಟಚ್ಚ ಭಾರತ ಅಭಿಯಾನದ ಅಡಿಯಲ್ಲಿ ಶ್ರಮದಾನವನ್ನು ಶ್ರೀ ಶಿವಾನಂದ ಆಶ್ರಮದಲ್ಲಿ ಮಾಡಿಸಲಾಗಿತು. ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕರೊಂದಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ 'ಕೀರ್ತಿರಾಜ್' ಮಕ್ಕಳ ಶಿಭಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿರುವುದು. 'ಪುನೀತ್' ರವರು ಮಕ್ಕಳಿಗೆ ಆಟೋಟವನ್ನು ಆಡಿಸುತ್ತಿರುವುದು. ಮಕ್ಕಳ ಸ್ವಚ್ಚ ಭಾರತ ಅಭಿಯಾನ .

"ವಿಶ್ಟಸ್ತನ್ಯಪಾನದಿನ"

Image
ವಿಶ್ಟಸ್ತನ್ಯಪಾನದಿನ  ಹೊಂಗಿರಣ ಪೌಂಡೇಷನ್  ಹಾಗೂ ಶ್ರೀದೇವಿ ವೈದ್ಯಕೀಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ಟ  ಸ್ತನ್ಯಪಾನ ದಿನವನ್ನು ಆಚರಿಸಲಾಗಿತು.     ನಿರ್ದೇಶಕರಾದ ಮಹದೇವ ಸ್ಟಾಮಿ  ನೆರವೇರಿಸಿಕೊಟ್ಟರು. ಶ್ರೀದೇವಿ ವೈದ್ಯಕೀಯ ಸಂಸ್ಥೆಯ ವೈದ್ಯಾದಿಕಾರಿಗಳೊಂದಿಗೆನಿರ್ದೇಶಕರಾದ 'ಮಹದೇವ ಸ್ಟಾಮಿ' ರವರು ಕಾರ್ಯಕ್ರಮ ನೆರವೇರಿಸಿಕೊಡುತ್ತಿರುವುದು.

ರಕ್ತತಪಾಸಣಾಶಿಬಿರ

Image
ರಕ್ತತಪಾಸಣಾಶಿಬಿರ  ಹೊಂಗಿರಣ ಸಂಸ್ಥೆ ಹಾಗೂ ಇಂಟರ್ನ್ಯಾಷನಲ್ ರೆಡ್ ಕ್ರಾಸ್ (international Redcross Society) ಯ ಸಂಯುಕ್ತಾಶ್ರಯದಲ್ಲಿ ಉಮಾಪ್ರಗತಿ ಕಾಲೇಜಿನಲ್ಲಿ ರಕ್ತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತುˌ 300 ರಕ್ಕೂ ಅಧಿಕ ಜನರು ರಕ್ತ ತಪಾಸಣೆಯನ್ನು ಮಾಡಿಸಿಕೊಂಡರು. #ನನಗಲ್ಲನಿನಗೆ ಎಂಬ ಶೀರ್ಷಿಕೆಯಡಿಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸದಸ್ಯರಾದ 'ಪುನೀತ್' ಹಾಗೂ 'ಅಣ್ಣೇಶ್' ರವರು ರಕ್ತ ತಪಾಸಣೆ ಮಾಡಿಸುತ್ತಿರುವುದು.

"ಮಕ್ಕಳ ಆರೋಗ್ಯ ಹಾಗೂ ಅಪೌಷ್ಷಿಕತೆಯ ಅರಿವು ಕಾರ್ಯಕ್ರಮ"

Image
    ಹೊಂಗಿರಣ ಸಂಸ್ಥೆಯ ಸದಸ್ಯರಾದ ನೇತ್ರಾರವರು ಇತ್ತೀಚಿಗೆ ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ ಹಾಗೂ ಅಪೌಷ್ಷಿಕತೆಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅತಿಥಿಗಣ್ಯರೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಿಕೊಡುತ್ತಿರುವ ಸದಸ್ಯರಾದ 'ನೇತ್ರಾ'.

"ತಾಯಂದಿರಿಗೆ ಮಕ್ಕಳ ಆರೈಕೆ ಹಾಗೂ ಆರೋಗ್ಯ ಕಾಳಜಿಯ ಅರಿವು"

Image
ಹೊಂಗಿರಣ ಸಂಸ್ಥೆಯ ಸದಸ್ಯರಾದ ತನುಜರವರು ಇತ್ತೀಚಿಗೆ ಅಂಗನವಾಡಿಯ ಮಕ್ಕಳು ಹಾಗೂ ಅವರ ತಾಯಂದಿರಿಗೆ ಮಕ್ಕಳ  ಆರೈಕೆ ಹಾಗೂ ಆರೋಗ್ಯ  ಕಾಳಜಿಯ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅಂಗನವಾಡಿ ಶಿಕ್ಷಕಿಯೊಂದಿಗೆ 'ತನುಜ' ರವರು.
Image
ಹೊಂಗಿರಣ ಸಂಸ್ಥೆಯ ಸದಸ್ಯರು ವಿಶ್ವಏಡ್ಸ್ ದಿನದಂದು ಕುಣಿಗಲ್ ನ ಅರಿವ್ರ ಜಾಥಾದಲ್ಲಿ ಬಾಗವಹಿಸಿದ್ದರು. ಅರಿವು ಜಾಥದಲ್ಲಿ ಸಂಸ್ಥೆಯ ಸಂಸ್ಥಾಪಕ ಸದಸ್ಯರುಗಳು. ವಿವಿದ ಶಾಲಾಕಾಲೇಜಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು.

"ಛದ್ಮವೇಷ" ಸ್ಪರ್ದೆ.

Image
ಸರ್ಕಾರಿ ಪ್ರೌಡಶಾಲೆ.ಕಣಬಗಟ್ಟೆˌಹಾಗೂ ಹೊಂಗಿರಣ ಪೌಂಡೇಷನ ಸಂಯುಕ್ತಾಶ್ರಯದೊಂದಿಗೆ ಮಕ್ಕಳ ಪ್ರತಿಭೆಯನ್ನು ಹೊರಗೆಳೆಯುವ & ಅವರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ "ಛದ್ಮವೇಷ" ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳು ಹಾಗೂ ಪೋಷಕರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಿ.ಎಂ.ಪರಮೇಶ್ಟರಪ್ಪ ˌಮುಖ್ಯ ಶಿಕ್ಷಕರಾದ ಸಿದ್ದರಾಮಪ್ಪˌಶಿಕ್ಷಕಿ ಅಕ್ಕಮಹಾದೇವಿˌಸಂಪನ್ಮೂಲ ವ್ಯಕ್ತಿಯಾಗಿ ರಾಜಶೇಖರ್ ರವರು ಆಗಮಿಸಿದ್ದರು ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿಯಾದ ಕೀರ್ತಿರಾಜ್ ರವರು ಭಾಗವಹಿಸಿದ್ದರು. ಸುಮಾರು 15 ದಿನಗಳ ಶಿಕ್ಷಕರುˌ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಸಮಸ್ತ ಗ್ರಾಮಸ್ಥರ ಪರಿಶ್ರಮದಿಂದ ಈ ಮಹತ್ಟಪೂರ್ಣ ಕಾರ್ಯಕ್ರಮ ನನಸಾಗಲು ಶ್ರಮಿಸಿದ ಎಲ್ಲರಿಗೂ ದನ್ಯವಾದಗಳು. ಛದ್ಮವೇಷ ಎಂದರೆ ಪಾತ್ರದಲ್ಲಿ ನಮ್ಮ ಮನಸ್ಸನ್ನು ತಲ್ಲೀನರಾಗಿಸಿಕೊಳ್ಳುವುದು ಇನ್ನೊಂದು ವಿಶೇಷವೇನೆಂದರೆ ಮಕ್ಕಳ ಕಲೆಗೆ ಪೋಷಕರ ಸಹಕಾರ & ಬೆಂಬಲ ಎಲ್ಲಾ ವೀಕ್ಷಕರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗಿತು. ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ 'ಕೀರ್ತಿರಾಜ್' ರವರು ನೆರವೇರಿಸಿಕೊಟ್ಟರು. ಕಾರ್ಯಕ್ರಮದ ಕೇಂದ್ರಬಿಂದುವಾದ ಛದ್ಮವೇಷದಾರಿ ಮಕ್ಕಳು.

"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"

Image
ಹೊಂಗಿರಣ ಸಂಸ್ಥೆಯ ನಿರ್ದೇಕರಾದ ತನುಜ ರವರು ಸೋಮಲಾಪುರ ಗ್ರಾಮದಲ್ಲಿ ˌದಿನಾಂಕ:16:07:2017 ರಂದು ಪರಿಸರ ಸಂರಕ್ಷಣೆ  &  ಶಿಕ್ಷಣದ  ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸಲು ಪ್ರಭಂಧ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ದೆಯಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಗಿತು. ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಸದಸ್ಯರಾದ 'ತನುಜ' ರವರು ಕಾರ್ಯಕ್ರಮ ನೆರವೇರಿಸುತ್ತಿರುವುದು. ಶಾಲೆಯ ಶಿಕ್ಷಕರು ಬಹುಮಾನ ವಿತರಿಸುತ್ತಿರುವುದು.

"ಹೊಂಗಿರಣ ಸಂಸ್ಥೆಯ ಉದ್ಘಾಟನೆ"

Image
  ಸಂಸ್ಥೆಯ ಉದ್ಘಾಟನೆಯಲ್ಲಿ ಭಾಗಿಯಾಗಿರುವ ಹರಳೂರಿನ ಸ್ಟಾಮಿಗಳು. ನಮ್ಮಸಂಸ್ಥೆಯ ಉದ್ಗಾಟನೆಯ ಪೋಟೊಗಳನ್ನು ತಡವಾಗಿ ಪ್ರಕಟಿಸುತ್ತಿರುವುದಕ್ಕೆ ಕ್ಷಮೆಯಿರಲಿˌ  ಶ್ರೀ ಉಮಾ ಪ್ರಗತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹರಳೂರಿನ ಸ್ಟಾಮಿಗಳುˌಡಾ.ಪ್ರಭುದೇವ್ ˌಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವ್ರುತ್ತರಾಗಿ ಸಮಾಜ ಸೇವಕರಾದ ಶ್ರೀಯುತ ಲೇಪಕ್ಷಿ ರವರು & ಗುರುಶ್ರೀ ಕಾಲೇಜಿನ ಸ್ಥಾಪಕರಾದ ಬಸವರಾಜ್ ರವರು ಹಾಗೂ ಉಮಾ ಪ್ರಗತಿ ಕಾಲೇಜಿನ ವ್ರುಂದಬಳಗ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಉಮಾಪ್ರಗತಿ ಕಾಲೇಜಿನ ವಿದ್ಯಾರ್ಥಿವ್ರುಂದ.

"ಅಂತರ ಯುವ ಸಂಘಗಳ ಕ್ರೀಡಾಕೂಟ"

Image
ನೆಹರು ಯುವಕೇಂದ್ರ.ಚಿಕ್ಕಮಗಳೂರುˌ ಪವನ್ ಯುವಕ ಸಂಘˌ ಜನಚಿಂತನ ಸಂಸ್ಥೆ.ತರೀಕೆರೆˌ ಹೊಂಗಿರಣ ಪೌಂಡೇಷನ್.ತುಮಕೂರು ಹಾಗೂ ರಾಷ್ರ್ಟೀಯ ಸೇವಾಯೋಜನೆ ಸರ್ಕಾರಿ ಪದವಿ ಪೂರ್ವ ಕಾಲೇಜು.ಶಿವನಿˌ ಇವರ ಸಂಯುಕ್ತಾಶ್ರಯದಲ್ಲಿ "ಅಂತರ ಯುವ ಸಂಘಗಳ ಕ್ರೀಡಾಕೂಟ"ವನ್ನು ಶಿವನಿ ಹೋಬಳಿಯಲ್ಲಿ ಆಚರಿಸಲಾಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುರೇಶ್ ಕುಮಾರ್ ರವರು ಬಾಲು ಎಸೆಯುವ ಮೂಲಕ ಉದ್ಘಾಟಿಸಿದರು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿತ್ತು. ಲಗೋರಿˌ ಥ್ರೋಯಿಂಗ್ ಬಾಲ್ˌ ಬಕೆಟ್ ಬಾಲ್ˌ ಮ್ಯೂಸಿಕಲ್ ಚೇರ್ˌ ಕೆರೆದಡˌ ಲೆಮೆನ್ ಅಂಡ್ ಸ್ಫೂನ್ ಮುಂತಾದ ಕ್ರೀಡೆಗಳು ಗಮನಸೆಳೆದವುˌ ಇದರೊಂದಿಗೆ ಶಿವನಿ ಕಾಲೇಜಿನ ಸಿಬ್ಬಂದಿ ವರ್ಗದವರೂ ಸಹಕಾರವನ್ನು ನೀಡಿ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗಿಯಾಗಿ ಸಂತಸವನ್ನು ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಡುವವರ ಸಂಖ್ಯೆಯು ಇಳಿಮುಖವಾಗುತಿದ್ದು ಪ್ರತಿಯೋರ್ವ ಪೋಷಕರು ಇದರ ಬಗ್ಗೆ ತಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕಾಗಿದೆ.   ನಂತರ ಕ್ರೀಡೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ˌಪದಕ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಗಿತು. ಜನಚಿಂತನ ಸಂಸ್ಥೆಯ ವೀರಭದ್ರಪ್ಪನವರು ಹಾಗೂ ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿಯಾದ ಕೀರ್ತಿರಾಜ್ ರವರು ಕಾರ್ಯಕ್ರಮವನ್ನು ನೆರವೇ...

"ರಾಷ್ರ್ಟೀಯ ಸಂವಿದಾನ ದಿನಾಚರಣೆ"

Image
ನೆಹರು ಯುವಕೇಂದ್ರ.ಚಿಕ್ಕಮಗಳೂರುˌ ಜನಚಿಂತನ ಸಂಸ್ಥೆ.ತರೀಕೆರೆˌ ಹೊಂಗಿರಣ ಫೌಂಡೇಷನ್.ತುಮಕೂರು ಹಾಗೂ ಕನ್ನಡ ಯುವಕ ಸಂಘದ ವತಿಯಿಂದ "ರಾಷ್ರ್ಟೀಯ ಸಂವಿದಾನ ದಿನಾಚರಣೆ"ಯನ್ನು ತರೀಕೆರೆ ತಾಲ್ಲೂಕಿನ ಕಣಬಗಟ್ಟೆ ಗ್ರಾಮದಲ್ಲಿ ಆಚರಿಸಲಾಗಿತು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜನಚಿಂತನ ಸಂಸ್ಥೆಯ ವೀರಬದ್ರಪ್ಪನವರು ಮಾತನಾಡಿದರು ನಮ್ಮ ಸಂವಿದಾನದ ರಚನೆಯು ನವಭಾರತದ ಜನರ ಚಿಂತನೆಗೆ ನೂತನ ಸ್ಪರ್ಶವನ್ನು ನೀಡಿದವು ಸಬಲರು ದುರ್ಬಲರು ಉಳ್ಳವರು ಇಲ್ಲದವರು ಎಂಬ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಯಶಸ್ಟಿಯಾಗಿದೆ ಅತೀ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಏಳ್ಗೆಯನ್ನು ಸಾದಿಸಿ ಸಮಾನತೆಯನ್ನು ತರಲು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿತು ಹಾಗೇ ಜನರ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ ಉದ್ದೇಶಪೂರ್ವಕವಾಗಿ ಯಾವುದೇವ್ಯಕ್ತಿಯಬಗ್ಗೆ ರುಣಾತ್ಮಕವಾಗಿ ಮಾತನಾಡಿದರೆ ಅವರ ವಿರುದ್ದ ಮಾತನಾಡುವುದು ಕಾನೂನಿನ ಪ್ರಕಾರ ಅಫರಾಧವಾಗುತ್ತದೆˌ ಪ್ರತಿಯೋರ್ವರಿಗೂ ತಮ್ಮ ನಿಲುವನ್ನು ವ್ಶಕ್ತಪಡಿಸುವ ಅಧಿಕಾರವಿದೆ ಇದನ್ನು ಇತರರು ಮತ್ಸರದ ಭಾವನೆ ತೋರದೆ ಅವರ ನಿಲುವನ್ನು ಸ್ಟಾಗತಿಸಬೇಕುˌ ಇದೇವೇಳೆಯಲ್ಲಿ ಮಹಾತ್ಮ ಗಾಂಧೀಜಿಯವರನ್ನು ಗೂಡ್ಸೆಯವರು ಗುಂಡಿಟ್ಟು ಕೊಂದಿದ್ದು ಅಭಿವ್ಯಕ್ತಿ ಸ್ಟಾತಂತ್ರ್ಯದ ಹರಣ ಎಂದು ಬಣ್ಣಿಸಿದರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಜುಳ ರವರು ಪ್ರತೀ ಗ್ರಾಮಸ್ತರೂ ಸಂವಿದಾನದ ಮೂಲಭೂತ ಅಂಶಗಳನ್ನು ತಿಳಿದು ಇತರರಿಗೂ ತಿಳ...